Download HinduNidhi App
Shri Krishna

ಶಮಂತಕಮಣಿ ಕಥೆ

Shamanthakamani Story Kannada

Shri KrishnaVrat Katha (व्रत कथा संग्रह)ಕನ್ನಡ
Share This

।। ಶಮಂತಕಮಣಿ ಕಥೆ ।।

ಭಗವಾನ್ ಕೃಷ್ಣನು ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ತೊಡೆದುಹಾಕಲು ಶಮಂತಕ ಮಣಿಯನ್ನು ಪಡೆದುಕೊಂಡನು ಮತ್ತು ಜಾಂಬವಂತ ಮತ್ತು ಸತ್ರಜಿತ್ ಎಂಬ ಇಬ್ಬರು ವ್ಯಕ್ತಿಗಳ ಹೆಣ್ಣುಮಕ್ಕಳನ್ನು ಮದುವೆಯಾದನು. ಶಮಂತಕ ಮಣಿಯನ್ನು ಒಳಗೊಂಡ ಕಾಲಕ್ಷೇಪವನ್ನು ಜಾರಿಗೆ ತರುವ ಮೂಲಕ, ಭಗವಂತನು ಭೌತಿಕ ಸಂಪತ್ತಿನ ನಿರರ್ಥಕತೆಯನ್ನು ಪ್ರದರ್ಶಿಸಿದನು.

ಶಮಂತಕ ಮಣಿಯ ಕಾರಣದಿಂದಾಗಿ ರಾಜ ಸತ್ರಜಿತ್ ಭಗವಾನ್ ಕೃಷ್ಣನನ್ನು ಅವಹೇಳನ ಮಾಡಿದನೆಂದು ಸುಕದೇವ ಗೋಸ್ವಾಮಿ ರಾಜ ಪರೀಕ್ಷಿತ್ ಎದುರು ಪ್ರಸ್ತಾಪಿಸಿದ್ದರು. ಬಳಿಕ ಈ ಘಟನೆಯ ವಿವರಗಳನ್ನು ಕೇಳಲು ಕುತೂಹಲಗೊಂಡು ರಾಜ ಪರೀಕ್ಷಿತ್ ಸುಖದೇವ ಗೋಸ್ವಾಮಿಯನ್ನು ಕೇಳಿದನು. ಹೀಗೆ ಸುಕದೇವ ಗೋಸ್ವಾಮಿ ಈ ಕಥೆಯನ್ನು ನಿರೂಪಿಸಿದರು.

ರಾಜ ಸತ್ರಜಿತ್ ತನ್ನ ಅತ್ಯುತ್ತಮ ಹಿತೈಷಿ ಸೂರ್ಯ ದೇವನ ಕೃಪೆಯಿಂದ ಶಮಂತಕ ಮಣಿಯನ್ನು ಪಡೆದನು. ನಂತರ, ರತ್ನವನ್ನು ಚೈನ್‌ಗೆ ಜೋಡಿಸಿ ಕುತ್ತಿಗೆಗೆ ಹಾಕಿಕೊಂಡ ಸತ್ರಜಿತ್ ದ್ವಾರಕಾಗೆ ಪ್ರಯಾಣ ಬೆಳೆಸಿದರು. ಆದರೆ, ಅಲ್ಲಿನ ನಿವಾಸಿಗಳು, ಅವನು ಸ್ವತಃ ಸೂರ್ಯ-ದೇವರೆಂದು ಭಾವಿಸಿ ಕೃಷ್ಣನ ಬಳಿಗೆ ಹೋಗಿ, ಭಗವಾನ್ ಸೂರ್ಯ ತನ್ನ ಪ್ರೇಕ್ಷಕರನ್ನು ಕರೆದುಕೊಂಡು ಬರಲು ಬಂದಿದ್ದಾನೆಂದು ತಿಳಿಸಿದನು. ಆದರೆ ಕೃಷ್ಣನು ಆತ ಸೂರ್ಯನಲ್ಲ, ರಾಜ ಸತ್ರಜಿತ್ ಎಂದು ಉತ್ತರಿಸಿದನು. ಅಲ್ಲದೆ, ಶಮಂತಕ ಮಣಿಯನ್ನು ಧರಿಸಿದ್ದರಿಂದ ಅತ್ಯಂತ ಉತ್ಕೃಷ್ಟನಾಗಿ ಕಾಣುತ್ತಿದ್ದಾನೆ ಎಂದು ಅಲ್ಲಿನ ಜನರಿಗೆ ವಿವರಿಸಿದ.

ದ್ವಾರಕದಲ್ಲಿ ಸತ್ರಜಿತ್ ತನ್ನ ಮನೆಯಲ್ಲಿ ವಿಶೇಷ ಬಲಿಪೀಠದ ಮೇಲೆ ಅಮೂಲ್ಯವಾದ ಕಲ್ಲನ್ನು ಸ್ಥಾಪಿಸಿದ್ದ. ಪ್ರತಿದಿನ ರತ್ನವು ದೊಡ್ಡ ಪ್ರಮಾಣದ ಚಿನ್ನವನ್ನು ಉತ್ಪಾದಿಸುತ್ತಿತ್ತು. ಮತ್ತು ಅದನ್ನು ಸರಿಯಾಗಿ ಪೂಜಿಸಿದರೆ ಯಾವುದೇ ವಿಪತ್ತು ಸಂಭವಿಸುವುದಿಲ್ಲ ಎಂದು ಭರವಸೆ ನೀಡುವ ಹೆಚ್ಚುವರಿ ಶಕ್ತಿಯನ್ನು ಶಮಂತಕ ಮಣಿ ಹೊಂದಿತ್ತು.

ಒಂದು ಸಂದರ್ಭದಲ್ಲಿ ಭಗವಾನ್ ಶ್ರೀ ಕೃಷ್ಣನು ರತ್ನವನ್ನು ಯದುಸ್‌ ರಾಜ, ಉಗ್ರಸೇನನಿಗೆ ಕೊಡುವಂತೆ ಸತ್ರಜಿತ್‌ಗೆ ವಿನಂತಿಸಿದನು. ಆದರೆ ಸತ್ರಜಿತ್ ದುರಾಸೆಯ ಕಾರಣದಿಂದ ಅದನ್ನು ನಿರಾಕರಿಸಿದನು. ಸ್ವಲ್ಪ ಸಮಯದ ನಂತರ ಸತ್ರಜಿತ್‌ನ ಸಹೋದರ ಪ್ರಸೇನಾ ಕುದುರೆಯ ಮೇಲೆ ಬೇಟೆಯಾಡಲು ಊರು ಬಿಟ್ಟಿದ್ದು, ಕುತ್ತಿಗೆಗೆ ಶಮಂತಕ ರತ್ನವನ್ನು ಧರಿಸಿದ್ದರು.

ಆದರೆ, ಮಾರ್ಗದಲ್ಲಿ ಸಿಂಹವು ಪ್ರಸೇನನನ್ನು ಕೊಂದು ರತ್ನವನ್ನು ಪರ್ವತ ಗುಹೆಯೊಂದಕ್ಕೆ ಕೊಂಡೊಯ್ದಿತು. ಅಲ್ಲಿ ಕರಡಿಗಳ ರಾಜ ಜಾಂಬವಂತ ವಾಸಿಸುತ್ತಿದ್ದನು. ಜಾಂಬವಂತ ಸಿಂಹವನ್ನು ಕೊಂದು ತನ್ನ ಮಗನಿಗೆ ಆಟವಾಡಲು ರತ್ನವನ್ನು ಕೊಟ್ಟನು.

ರಾಜ ಸತ್ರಜಿತ್‌ನ ಸಹೋದರ ಹಿಂತಿರುಗದಿದ್ದಾಗ, ರಾಜನು ಶ್ರೀ ಕೃಷ್ಣನು ಶಮಂತಕ ಮಣಿಗಾಗಿ ಅವನನ್ನು ಕೊಂದನೆಂದು ಭಾವಿಸಿದನು. ಶ್ರೀ ಕೃಷ್ಣನು ಸಾಮಾನ್ಯ ಜನರಲ್ಲಿ ಹರಡುತ್ತಿದ್ದ ಈ ವದಂತಿಯನ್ನು ಕೇಳಿ, ಮತ್ತು ತನ್ನ ಮೇಲಿನ ಕಳಂಕವನ್ನು ತೆಗೆದುಕಾಕ; ಕೃಷ್ಣನು ಕೆಲವು ನಾಗರಿಕರೊಂದಿಗೆ ಪ್ರಸೇನಾನನ್ನು ಹುಡುಕಲು ಹೋದನು. ಆ ವೇಳೆ ಪ್ರಸೇನಾ ಹೋದ ಮಾರ್ಗದಲ್ಲಿ ಕೃಷ್ಣ ಹೋದಾಗ ಆತನ ಮೃತದೇಹ ಮತ್ತು ಕುದುರೆಯು ಬಿದ್ದಿರುವುದನ್ನು ನೋಡಿದರು.

ಬಳಿಕ, ಜಾಂಬವಂತ ಕೊಂದಿದ್ದ ಸಿಂಹದ ಶವವನ್ನು ಅವರು ನೋಡಿದರು. ಈ ಕುರಿತು ತಾನು ತನಿಖೆ ಮಾಡುತ್ತೇನೆಂದು ಗುಹೆಯ ಒಳಗೆ ಹೊರಟ ಕೃಷ್ಣ ಜನರನ್ನು ಗುಹೆಯ ಹೊರಗೇ ಇರುವಂತೆ ಹೇಳಿದ್ದನು.

ಕೃಷ್ಣ ಜಾಂಬವಂತನ ಗುಹೆಯನ್ನು ಪ್ರವೇಶಿಸಿದಾಗ ಮಗುವಿನ ಪಕ್ಕದಲ್ಲಿದ್ದ ಶಮಂತಕ ಮಣಿಯನ್ನು ನೋಡಿದನು. ಆದರೆ ಕೃಷ್ಣ ಆಭರಣವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ, ಮಗುವನ್ನು ನೋಡಿಕೊಳ್ಳುತ್ತಿದ್ದ ದಾದಿ ಅದನ್ನು ನೋಡಿ ಕೂಗಿಕೊಂಡಳು. ಕೂಗನ್ನು ಕೇಳಿದ ಜಂಬವಂತನು ತಕ್ಷಣವೇ ಸ್ಥಳಕ್ಕೆ ಬಂದ.

ಆದರೆ, ಕೃಷ್ಣನನ್ನು ಸಾಮಾನ್ಯ ಮನುಷ್ಯನೆಂದು ಪರಿಗಣಿಸಿದ ಜಂಬವಂತ ಅವನೊಂದಿಗೆ ಯುದ್ಧ ಮಾಡಲು ಪ್ರಾರಂಭಿಸಿದನು. ಇಪ್ಪತ್ತೆಂಟು ದಿನಗಳ ಕಾಲ ನಿರಂತರವಾಗಿ ಅವರು ಹೋರಾಡಿದ್ದು, ಕೊನೆಗೆ ಜಂಬವಂತ ಭಗವಂತನ ಹೊಡೆತದಿಂದ ದುರ್ಬಲನಾದನು.

ನಂತರ ಕೃಷ್ಣನು ಪರಮಾತ್ಮನ ಸರ್ವೋಚ್ಚ ವ್ಯಕ್ತಿತ್ವ ಎಂದು ಅರ್ಥಮಾಡಿಕೊಂಡ ಜಂಬವಂತ ಶ್ರೀ ಕೃಷ್ಣನನ್ನು ಸ್ತುತಿಸಲು ಪ್ರಾರಂಭಿಸಿದನು. ಈ ವೇಳೆ ಭಗವಂತನು ತನ್ನ ಕಮಲದ ಕೈಯಿಂದ ಜಾಂಬವಂತನನ್ನು ಮುಟ್ಟಿ, ಅವನ ಭಯವನ್ನು ಹೋಗಲಾಡಿಸಿದನು. ನಂತರ ಶಮಂತಕ ಮಣಿಯ ಬಗ್ಗೆ ಎಲ್ಲವನ್ನೂ ವಿವರಿಸಿದನು. ಹೀಗಾಗಿ ಜಂಬವಂತ ಶ್ರೀ ಕೃಷ್ಣನಿಗೆ ಶಮಂತಕ ಮಣಿಯನ್ನು ಸಂತೋಷದಿಂದ ಅರ್ಪಿಸಿದ. ಜತೆಗೆ, ತನ್ನ ಅವಿವಾಹಿತ ಪುತ್ರಿ ಜಾಂಬವತಿಯನ್ನು ಕೊಟ್ಟು ಮದುವೆಯಾದರು.

ಈ ಮಧ್ಯೆ, ಕೃಷ್ಣನು ಗುಹೆಯಿಂದ ಹೊರಬರಲು ಕಾದಿದ್ದ ಜತೆಗಾರರು 12 ದಿನಗಳ ಬಳಿಕ ನಿರಾಶೆಯಿಂದ ದ್ವಾರಕಕ್ಕೆ ಹಿಂದಿರುಗಿದರು. ಕೃಷ್ಣನ ಎಲ್ಲಾ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ತೀವ್ರ ದುಃಖಿತರಾಗಿದ್ದರು ಮತ್ತು ಶ್ರೀ ಕೃಷ್ಣ ಸುರಕ್ಷಿತವಾಗಿ ಮರಳಲಿ ಎಂದು ದುರ್ಗಾ ದೇವಿಯನ್ನು ಪೂಜಿಸಲು ಪ್ರಾರಂಭಿಸಿದರು.

ಅವರು ದುರ್ಗಾ ಆರಾಧನೆಯನ್ನು ಮಾಡುತ್ತಿರುವಾಗಲೇ, ಕೃಷ್ಣನು ತನ್ನ ಪತ್ನಿ ಜಾಂಬವಂತಿಯ ಜತೆ ದ್ವಾರಕಾ ನಗರವನ್ನು ಪ್ರವೇಶಿಸಿದರು. ಸಹವಾಸದಲ್ಲಿ ನಗರವನ್ನು ಪ್ರವೇಶಿಸಿದನು. ಬಳಿಕ ರಾಜನ ಆಸ್ಥಾನಕ್ಕೆ ಸತ್ರಜಿತ್‌ನನ್ನು ಕರೆಸಿಕೊಂಡು ನಡೆದ ಕಥೆ ಎಲ್ಲವನ್ನು ಹೇಳಿ ಶಮಂತಕ ಮಣಿಯನ್ನು ವಾಪಸ್ ಮಾಡಿದನು.

ಬಳಿಕ ಅವಮಾನ ಮತ್ತು ಪಶ್ಚಾತಾಪದಿಂದ ಸತ್ರಜಿತ್ ಆಭರಣವನ್ನು ಪಡೆದುಕೊಂಡನು. ಆದರೆ ತನ್ನ ಮನೆಗೆ ಹಿಂತಿರುಗಿದ ಬಳಿಕ ಸತ್ರಜಿತ್, ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಕೃಷ್ಣನಿಗೆ ಶಮಂತಕ ಮಣಿಯನ್ನು ಮಾತ್ರವಲ್ಲದೆ ಅವನ ಮಗಳನ್ನೂ ನೀಡಲು ನಿರ್ಧರಿಸಿದನು. ದೈವಿಕ ಗುಣಗಳನ್ನು ಹೊಂದಿದ್ದ ಸತ್ರಜಿತ್ ಅವರ ಮಗಳು ಸತ್ಯಭಾಮನ ಕೈಯನ್ನು ಶ್ರೀ ಕೃಷ್ಣ ಹಿಡಿದನು. ಆದರೆ ಶಮಂತಕ ಮಣಿಯನ್ನು ನಿರಾಕರಿಸಿದ ಶ್ರೀ ಕೃಷ್ಣ ರಾಜ ಸತ್ರಜಿತ್‌ಗೆ ಪುನ: ಹಿಂದಿರುಗಿಸಿದನು.

Read in More Languages:

Found a Mistake or Error? Report it Now

Download HinduNidhi App

Download ಶಮಂತಕಮಣಿ ಕಥೆ PDF

ಶಮಂತಕಮಣಿ ಕಥೆ PDF

Leave a Comment